ಆಫೀಸ್ ನಲ್ಲಿ ನಾಯಕ ದಿಗಂತ್ಗೆ ಅವರ ಬಾಸ್ ಇಂದ್ರಜಿತ್ ನಿನಗೆ ಯುಎಸ್ಎ ಗೆ ಹೋಗುವ ಚಾನ್ಸ್ ಸಿಕ್ಕಿದೆ ಎಂದು ಹೇಳಿ ಅಭಿನಂದಿಸುವ ದೃಶ್ಯವನ್ನು ಬರ್ಫಿ ಚಿತ್ರಕ್ಕಾಗಿ ದೊಮ್ಮಲೂರಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಮಾತಿನ ಭಾಗದ ಹಾಗೂ ಎಲ್ಲ ಹಾಡುಗಳ ಷೂಟಿಂಗ್ ಮುಗಿದಿದ್ದು ಸಾಹಸ ದೃಶ್ಯವೊಂದು ಮಾತ್ರ ಬಾಕಿ ಉಳಿದಿದೆ.
ಕೆ.ಎಂ.ಶಂಕರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶೇಖರ್ ಕಥೆ-ಚಿತ್ರಕಥೆ ರಚಿಸಿ ನಿರ್ದೇಶನ ಮಾಡುತ್ರಿದ್ದಾರೆ. ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಬಿ.ಎ. ಮಧು ಸಂಭಾಷಣೆ, ಜಯಂತ್ ಕಾಯ್ಕಿಣಿ ಕವಿರಾಜ್, ಗೌಸ್ ಫಿರ್, ಹೃದಯಶಿವ ಸಾಹಿತ್ಯ, ಕೆ.ಎಂ. ಪ್ರಕಾಶ್ ಸಂಕಲನ, ಎಸ್. ಬಾಹುಬಲಿ ಸಹಕಾರ ನಿರ್ದೇಶನ, ರವಿವರ್ಮ ಸಾಹಸ, ಹರ್ಷ, ಕಂಬಿರಾಜ್ ನೃತ್ಯ, ಎನ್. ಎಸ್. ಚಂದ್ರಶೇಖರ್ ನಿರ್ಮಾಣ ನಿರ್ವಹಣೆ ಇದೆ. ದಿಗಂತ್, ಬಾಮಾ, ಸುಧಾ ಬೆಳವಾಡಿ, ಜೈಜಗದೀಶ್, ಹರೀಶ್ ರಾಜ್, ದಿಲೀಪ್ ರಾಜ್ ಸುಚೇಂದ್ರ ಪ್ರಸಾದ್, ಪವಿತ್ರ ಲೋಕೇಶ್, ಶಂಕರ್ಭಟ್ ಸಂಯುಕ್ತ ಬೆಳವಾಡಿ ಹಾಗೂ ವಿಶೇಷ ಪಾತ್ರದಲ್ಲಿ ಇಂದ್ರಜಿತ್ ಲಂಕೇಶ್ ಅಭಿನಯಿಸುತ್ತಿದ್ದಾರೆ.